Sunday 7 January 2018

ಕನ್ನಡ ಕವಿಗಳ ನುಡಿಮುತ್ತು ಗಳು. ಕನ್ನಡ ಸುಭಾಷಿತಗಳು kannada kavigala nudimuttugalu

ಕನ್ನಡ ಕವಿಗಳ ನುಡಿಮುತ್ತುಗಳು




卐 ' ಮನುಜಮತ, ವಿಶ್ವಪಥ, ಸರ್ವೋದಯ,ಸಮನ್ವಯ,ಪೂರ್ಣದೃಷ್ಟಿ - ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ.ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜಮತ. ಆ ಪಥ , ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು.ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ , ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನೂ ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ. '
------------------------------------ ಕುವೆಂಪು.




卐 " ನನ್ನ ಪ್ರೌಢಶಾಲಾ ಶಿಕ್ಷಣ ಮುಗಿಯುವವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದೇನೆ.ನಾನು ಕಾಲೇಜಿಗೆ ಹೋದಾಗ ಎಲ್ಲರಿಗಿಂತ ಉತ್ತಮವಾಗಿ ಇಂಗ್ಲೀಷ್ ಮಾತನಾಡುತ್ತಿದ್ದೆ.ನಾನು ಕನ್ನಡ ಮಾಧ್ಯಮದಲ್ಲಿಯೇ ಓದಬೇಕು , ಉತ್ತಮವಾಗಿ ಇಂಗ್ಲೀಷ್ ಮಾತನಾಡಬೇಕು ಎನ್ನುವುದು ತಂದೆಯ ಆಶಯವಾಗಿತ್ತು. ಆದರೆ ಇಂದು ಅತ್ತಕಡೆ ಇಂಗ್ಲೀಷ್ ಬಾರದೆ ಇತ್ತಕಡೆ ಕನ್ನಡವೂ ತಿಳಿಯದಿರುವ ಕಾಲದಲ್ಲಿ ನಾವಿದ್ದೇವೆ.ಉತ್ತಮ ಇಂಗ್ಲೀಷ್ ಹೇಳಿಕೊಡುವ , ಕನ್ನಡವನ್ನು ಕಲಿಸುವ ಶಿಕ್ಷಣ ನಮಗೆ ಬೇಕಾಗಿದೆ."
------------------------ಪ್ರೊಫೆಸರ್. ಸಿ.ಎನ್.ಆರ್.ರಾವ್.




卐 "ತನ್ನನ್ನು ತಾನು ಗುರುತಿಸಿಕೊಂಡು, ತನ್ನ ವಿಶೇಷವನ್ನು ಶಕ್ತಿಯ ಪರಿಮಿತಿಯನ್ನು ಅರಿತು, ತನ್ನ ತನದ ವೈಶಿಷ್ಟ್ಯವನ್ನು ಬೆಳೆಸಿಕೊಳ್ಳುತ್ತಾ ಉಳಿದವರ ಜೊತೆಗೆ ಸಮಭಾವದಿಂದ ಸಹಕರಿಸಲು ಕಲಿಸುವುದೇ ನಿಜವಾದ ಸಂಸ್ಕೃತಿಯ ಲಕ್ಷಣ. "
----------------------ಎಂ.ಗೋಪಾಲಕೃಷ್ಣ ಅಡಿಗ.


卐 " ಲೋಕದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಅನುಭವಗಳಿವೆ.ಅವುಗಳಲ್ಲಿ ಕೆಲವು ಗ್ರಾಹ್ಯವಾದವು, ಕೆಲವು ತ್ಯಾಜ್ಯ ಎಂದು ನಿರ್ಧಾರ ಮಾಡುವ ಒರೆಗಲ್ಲು ಯಾವುದು ? ಅವರವರ ಸ್ವಂತ ಅನುಭವವೆ !"
----------------ಜಿ.ಪಿ.ರಾಜರತ್ನಂ.




卐 "ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ ।
ಪೆಣ್ಣಲ್ಲವೆ ಪೊರೆದವಳು ।
ಪೆಣ್ಣುಪೆಣ್ಣೆಂದೇತಕೆ ಬೀಳುಗಳೆವರು ।
ಕಣ್ಣು ಕಾಣದ ಗಾವಿಲರು ।"
----------------------- ಸಂಚಿಯ ಹೊನ್ನಮ್ಮ.


卐 " ಆಡದೇ ಮಾಡುವವ ರೂಢಿಯೊಳಗುತ್ತಮನು , ಆಡಿ ಮಾಡುವವ ಮಧ್ಯಮನು , ಆಡಿಯೂ ಮಾಡದವ ಅಧಮನು "
--------------------------ಸರ್ವಜ್ಞ.


卐 "ಇತಿಹಾಸವೆಂಬುದು ಕೇವಲ ರಾಜ ರಾಣಿಯರ ಕಥೆಯಲ್ಲ , ಕಾಲಕಾಲಕ್ಕೆ ಬದಲಾಗುತ್ತಾ ಬಂದ ಬದುಕು.ಅದರ ಕಾಲಧರ್ಮ , ಅದರಿಂದ ಪ್ರಭಾವಿತರಾದ ಜನರ ರೀತಿನೀತಿಗಳು , ಆ ಸಾಮಾಜಿಕ ವ್ಯವಸ್ಥೆಯ ಪ್ರಮುಖ ಶಕ್ತಿಗಳು - ಇವೆಲ್ಲಾ ಇತಿಹಾಸವನ್ನು ಬಿಂಬಿಸುವ ಮುಖ್ಯ ಅಂಶಗಳಾಗಿವೆ. ಸಾಮ್ರಾಜ್ಯಗಳು ಎದ್ದು ಬಿದ್ಧ ಉತ್ಕರ್ಷ - ಅಧಃಪತನಗಳಿಗೆ ಯಾವನೋ ರಾಜ , ಒಬ್ಬಳು ರಾಣಿ ಕಾರಣವೆನ್ನುವುದು ಸರಿಯಾಗದು. ಆ ಸೃಷ್ಟಿ , ಲಯದ ಹಿಂದೆ ಆಯಾ ಜನಾಂಗಗಳ ಕಥೆಯಿದೆ.ಈ ಘಟನೆಗಳ ಹಿಂದೆ ಜನಜೀವನ, ಕಲೆ , ಸಂಸ್ಕೃತಿಗಳ ಪ್ರೇರಕ ಶಕ್ತಿಗಳಿವೆ."
----------------------------ನಿರಂಜನ.




卐 ಕನ್ನಡದ ಸೊಗಸು
' ಮಲ್ಲಿಗೆಗೆ ಹುಳಿಯಕ್ಕು , ಕಲ್ಲಿಗೆ ಗಂಟಕ್ಕು
ಹಲ್ಲಿಗೆ ನೊಣವು ಸವಿಯಕ್ಕು - ಕನ್ನಡದ
ಸೊಲ್ಲುಗಳ ನೋಡಿ ಸರ್ವಜ್ಞ. '
--------------------------- ಸರ್ವಜ್ಞ.


卐 " ಹಲವು ಹಳ್ಳಗಳು ಹರಿದು ಬಂದು ಸಮುದ್ರವಾಗುವಂತೆ , ಕೆಲವನ್ನು ತಿಳಿದವರಿಂದ ಕಲಿತು , ಕೆಲವನ್ನು ಶಾಸ್ತ್ರಗಳನ್ನು ಕೇಳುತ್ತಾ , ಕೆಲವನ್ನು ಮಾಡುವವರನ್ನು ಕಂಡು, ಕೆಲವನ್ನು ಎಚ್ಚರದಿಂದ ನೋಡುತ್ತಾ , ಕೆಲವನ್ನು ಸಜ್ಜನರ ಸಹವಾಸದಿಂದ ತಿಳಿದರೆ ಮನುಷ್ಯ ಸರ್ವಜ್ಞನಾಗುತ್ತಾನೆ".
------------------------ಪುಲಿಗೆರೆ ಸೋಮೇಶ್ವರ.


卐 ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ
ಕನ್ನಡ ಕಸ್ತೂರಿಯನ್ನ
ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ ? ನೀನದನ್ನ
ನವಶಕ್ತಿಯನೆಬ್ಬಿಸು -
ಹೊಸಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು ॥
--------------------ಎಂ.ಗೋವಿಂದ ಪೈ.


卐 ಬೇರೆಯವರ ವಿಚಾರಗಳನ್ನು, ಬೇರೆಯವರ ಧರ್ಮವನ್ನು ಸಹಿಸಿಕೊಂಡು ಬಾಳಲು ಸಾಧ್ಯವಾದಲ್ಲಿ ಅದು ಕಸವರ ( ಚಿನ್ನ, ಸಂಪತ್ತು). ಹೀಗಲ್ಲದೆ ಕಸ ಮತ್ತು ಕಸವರ ಎರಡೂ ಒಂದೇ ಎಂದು ತಿಳಿದವರು ದುಃಖವನ್ನು ಅನುಭವಿಸುತ್ತಾರೆ.
-------------------ಶ್ರೀ ವಿಜಯ .




卐 ದುಃಖಕ್ಕೆ ಸಿಕ್ಕಷ್ಟು ಬೇಗ ಕಾರಣ ಸುಖಕ್ಕೆ ಸಿಗುವುದಿಲ್ಲ.
--------------------' ಪಿ.ಲಂಕೇಶ್.




卐 " ಬಂದ ಸುಖವ ಬಿಡಬೇಡ , ಬಾರದುದ ಬೇಕೆಂದು ಬಯಸಬೇಡ."
------------------------------ರತ್ನಾಕರ ವರ್ಣಿ.


卐 ಜೀವನ ಸುಂದರ ಸ್ವಪ್ನವೂ ಅಲ್ಲ, ಕಹಿ ಬೇವು ಅಲ್ಲ ; ಬೇವು - ಬೆಲ್ಲಗಳ ಮಿಶ್ರಣ ಅದು.ಅರೆ ಕಹಿ, ಅರೆ ಸಿಹಿ ,ಸ್ವಲ್ಪ ನಗು ,ಕೊಂಚ ಅಳು; ತುಸು ಕೋಪ , ನಸು ತಾಪ. ನೀನದನ್ನು ನಗುನಗುತ್ತ ನುಂಗಬೇಕು, ನೋವನ್ನು ನಗೆಯಾಗಿ ಪರಿವರ್ತಿಸಿಕೊಳ್ಳಬೇಕು.
-----------------------------ನಾಡಿಗೇರ್ ಕೃಷ್ಣರಾಯರು.






卐 " ನಡೆವವರು ಎಡವದೆ ಕುಳಿತವರು ಎಡವುತ್ತಾರೆಯೆ?"
------------------------ರಾಘವಾಂಕ.




卐 " ಒಬ್ಬ ಮನುಷ್ಯ, ಆತನ ಸ್ನೇಹಿತರು ಹೊಗಳಿ ಹಾಡುವಷ್ಟು ಒಳ್ಳೆಯವನೂ ಇರುವುದಿಲ್ಲ,ಅವನಿಗಾಗದವರು ತೆಗಳಿ ತಿರಸ್ಕರಿಸುವಷ್ಟು ಕೆಟ್ಟವನೂ ಇರುವುದಿಲ್ಲ. "
---------------------ಮಾಸ್ತಿ ವೆಂಕಟೇಶ ಅಯ್ಯಂಗಾರ್ .


卐 ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ ?
ಸಮುದ್ರದ ತಡಿಯಲೊಂದು ಮನೆಯಮಾಡಿ ನೊರೆತೆರೆಗಳಿಗೆ ಅಂಜಿದೊಡೆ ಎಂತಯ್ಯ ?
ಸಂತೆಯೊಳಗೆ ಒಂದು ಮನೆಯಮಾಡಿ ಶಬ್ದಕ್ಕೆ ನಾಚಿದೊಡೆ ಎಂತಯ್ಯ?
ಲೋಕದಲ್ಲಿ ಹುಟ್ಟಿಬಂದ ಬಳಿಕ ಸ್ತುತಿ - ನಿಂದೆಗಳು ಬಂದೊಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
----------------ಅಕ್ಕ ಮಹಾದೇವಿ.


卐 'ಎಲ್ಲರೂ ತಮ್ಮ ತಮ್ಮ ಬುದ್ಧಿಗೆ ತೋಚಿದ್ದನ್ನು , ತಮಗೆ ಉತ್ತಮವೆಂದು ತೋರಿದ ಕ್ರಮದಲ್ಲಿ ಚೆನ್ನಾಗಿಯೇ ಹೇಳುತ್ತಾರೆ.ವಿದ್ಯೆ ಲೋಕದಲ್ಲಿ ಯಾರೋ ಒಬ್ಬರಿಗಾಗಿ ಬಂದುದಲ್ಲ.ಲೋಕವನ್ನು ಮೆಚ್ಚಿಸಲು ಪರಮೇಶ್ವರನಿಗಾದರೂ ಸಾಧ್ಯವೆ ? ಆಡುವವರು ತಮ್ಮ ಹಮ್ಮಿಗಾಗಿ ಆಡುತ್ತಾರೆ. ಕೆಟ್ಟ ಮಾತಿನ ಭಯದಿಂದ ಕೆಟ್ಟವನ ಮೇಲೆ ಏಕೆ ಅನುಮಾನ ಪಡಬೇಕು ? '
----------------------ಚೌಂಡರಸ.



ಸವರ್ಣ ದೀರ್ಘ ಸಂಧಿ.

ಸವರ್ಣ ದೀರ್ಘ ಸಂಧಿ.


[ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ.
[ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ.
[ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ]
ಪೂರ್ವ ಪದ + ಉತ್ತರ ಪದ = ಸಂಧಿಪದ
1. ರವಿ + ಇಂದ್ರ = ರವೀಂದ್ರ ( ಇ+ಇ= ಈ)
2. ದೇವ+ ಆಲಯ= ದೇವಾಲಯ. (ಅ+ಆ=ಆ)
3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ)
4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ)
5. ಗಿರಿ+ ಇಂದ್ರ = ಗಿರೀಂದ್ರ
6. ಮುನಿ+ ಇಂದ್ರ =ಮುನೀಂದ್ರ.
7. ಅಲ್ಪ + ಅಕ್ಷರ =ಅಲ್ಪಾಕ್ಷರ.
8. ವಿದ್ಯ+ ಅರ್ಜನೆ=ವಿದ್ಯಾರ್ಜನೆ.
9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ.
10. ಸೀತ+ಅನ್ವೇಷಣೆ= ಸೀತಾನ್ವೇಷಣೆ.
11. ಪಂಚ+ಆಸ್ಯ=ಪಂಚಾಸ್ಯ.
12. ಶಾಸಕ+ಅಂಗ=ಶಾಸಕಾಂಗ.
13. ಅಭಯ+ಅರಣ್ಯ =ಅಭಯಾರಣ್ಯ.
14. ಉಭಯ+ಅರಣ್ಯ =ಉಭಯಾರಣ್ಯ
15. ವಸ್ರ್ತ + ಆಭರಣ= ವಸ್ತ್ರಾಭರಣ.
16. ಗೌರಿ+ಈಶ =ಗೌರೀಶ.
17. ಕಟು+ಉಕ್ತಿ=ಕಟೂಕ್ತಿ.
18. ಕೃಷ್ಣ +ಅಜಿನ=ಕೃಷ್ಣಾಜಿನ.
19. ಪೀತ+ಅಂಬರ=ಪೀತಾಂಬರ.
20. ಏಕ+ಆಸನ=ಏಕಾಸನ.
21. ಧರ್ಮ+ಅರ್ಥ =ಧರ್ಮಾರ್ಥ.
22. ಇಂದ್ರ +ಆದಿ=ಇಂದ್ರಾದಿ.
23. ತಿಂದು +ಉಂಡು=ತಿಂದುಂಡು.
24. ಬಲರಾಮ+ಅರ್ಜುನ =ಬಲರಾಮಾರ್ಜುನ.




ಉದಾಹರಣೆಗೆ
ಸವರ್ಣ ದೀರ್ಘ ಸಂಧಿ.


[ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ.
[ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ.
[ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ.
[ ] ಉದಾಹರಣೆಗೆ
ಪೂರ್ವ ಪದ + ಉತ್ತರ ಪದ = ಸಂಧಿಪದ
1. ರವಿ + ಇಂದ್ರ = ರವೀಂದ್ರ ( ಇ+ಇ= ಈ)
2. ದೇವ+ ಆಲಯ= ದೇವಾಲಯ. (ಅ+ಆ=ಆ)
3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ)
4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ)
5. ಗಿರಿ+ ಇಂದ್ರ = ಗಿರೀಂದ್ರ
6. ಮುನಿ+ ಇಂದ್ರ =ಮುನೀಂದ್ರ.
7. ಅಲ್ಪ + ಅಕ್ಷರ =ಅಲ್ಪಾಕ್ಷರ.
8. ವಿದ್ಯ+ ಅರ್ಜನೆ=ವಿದ್ಯಾರ್ಜನೆ.
9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ.
10. ಸೀತ+ಅನ್ವೇಷಣೆ= ಸೀತಾನ್ವೇಷಣೆ.
11. ಪಂಚ+ಆಸ್ಯ=ಪಂಚಾಸ್ಯ.
12. ಶಾಸಕ+ಅಂಗ=ಶಾಸಕಾಂಗ.
13. ಅಭಯ+ಅರಣ್ಯ =ಅಭಯಾರಣ್ಯ.
14. ಉಭಯ+ಅರಣ್ಯ =ಉಭಯಾರಣ್ಯ
15. ವಸ್ರ್ತ + ಆಭರಣ= ವಸ್ತ್ರಾಭರಣ.
16. ಗೌರಿ+ಈಶ =ಗೌರೀಶ.
17. ಕಟು+ಉಕ್ತಿ=ಕಟೂಕ್ತಿ.
18. ಕೃಷ್ಣ +ಅಜಿನ=ಕೃಷ್ಣಾಜಿನ.
19. ಪೀತ+ಅಂಬರ=ಪೀತಾಂಬರ.
20. ಏಕ+ಆಸನ=ಏಕಾಸನ.
21. ಧರ್ಮ+ಅರ್ಥ =ಧರ್ಮಾರ್ಥ.
22. ಇಂದ್ರ +ಆದಿ=ಇಂದ್ರಾದಿ.
23. ತಿಂದು +ಉಂಡು=ತಿಂದುಂಡು.
24. ಬಲರಾಮ+ಅರ್ಜುನ =ಬಲರಾಮಾರ್ಜುನ.




ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi muttugalu









1. ಬೇಸರಕ್ಕೆ ಕುತೂಹಲವೇ ಔಷಧಿ. ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. -----ಎಲೆನ್ ಪಾರ್.
2. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.
3. ನಾವೇನು ಯೋಚಿಸುತ್ತೇವೆ , ತಿಳಿದುಕೊಂಡಿದ್ದೇವೆ ಅಥವಾ ನಂಬದ್ದೇವೆ ಎಲ್ಲವೂ ಕೊನೆಯಲ್ಲಿ ಬೀರುವ ಪರಿಣಾಮ ಅಷ್ಟಕ್ಕಷ್ಟೆ. ನಾವೇನು ಮಾಡಿದ್ದೇವೆ ಎನ್ನುವುದಷ್ಟೇ ಪರಿಣಾಮ ಬೀರುವುದು.---- ಜಾನ್ ರಸ್ಕಿನ್.
4. ದುಷ್ಟ ವಿಚಾರಗಳು , ದುಃಖಕ್ಕೆ ಮೂಲ ಕಾರಣ.---- ಗೌತಮ ಬುದ್ಧ.
5. ಗಂಡಾಂತರ ಅನಿರೀಕ್ಷಿತವಾಗಿ ಅನಿರೀಕ್ಷಿತ ಸ್ಥಳಗಳಲ್ಲಿ ನಮ್ಮನ್ನೇ ಕಾದಿರುತ್ತವೆ.ಆದ್ದರಿಂದ ನಾವು ಪ್ರತಿ ಹೆಜ್ಜೆಯನ್ನು ಎಚ್ಚರದಿಂದ ಇಡಬೇಕು.----- ಗಯಟೆ.










1. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು.---- ಡಾ.ಬಿ.ಆರ್.ಅಂಬೇಡ್ಕರ್.
2. ಪರರನ್ನು ಗೌರವಿಸುವುದನ್ನು ಕಲಿಯದಿದ್ದರೆ ನಾವೆಂದೂ ದೊಡ್ಡವರಾಗುವುದಿಲ್ಲ.----ವಲ್ಲಭ ಭಾಯಿ ಪಟೇಲ್.
3. ಜಗತ್ತಿನಲ್ಲಿ ಅತ್ಯಂತ ಬಲಯುತ ಶಕ್ತಿ ಎಂದರೆ ಪ್ರೀತಿ. ಪ್ರೀತಿ ಇಲ್ಲದ ಜೀವನ ಸಾವಿಗೆ ಸಮ.---ಮಹಾತ್ಮಾ ಗಾಂಧಿ.
4. ಬೇಟೆಯ ನಂತರ,ಯುದ್ಧದ ವೇಳೆ ಮತ್ತು ಚುನಾವಣೆಗೆ ಮುನ್ನ ಹೇಳುವಷ್ಟು ಸುಳ್ಳುಗಳನ್ನು ಜನ ಇನ್ಯಾವ ಹೊತ್ತಲ್ಲೂ ಹೇಳುವುದಿಲ್ಲ. ----ಬಿಸ್ಮಾರ್ಕ್.
5. ಸತ್ಯಕ್ಕೆ ಒಂದು ಬಣ್ಣ. ಸುಳ್ಳಿಗೆ ನಾನಾ ಬಣ್ಣ. ----ಲ್ಯಾಟಿನ್ ಗಾದೆ.
6. ಶಕ್ತಿ ದೈಹಿಕ ಬಲದಿಂದ ಬರುವುದಿಲ್ಲ. ಅದು ಬರುವುದು ಅದಮ್ಯವಾದ ಇಚ್ಛಾಶಕ್ತಿಯಿಂದ.----ಮಹಾತ್ಮಾ ಗಾಂಧಿ.
7. ಶ್ರದ್ಧೆ ಇಲ್ಲದೆ ಮಾಡುವ ಯಾವ ಕೆಲಸವೂ ಮಹಾನ್ ಆಗುವುದಿಲ್ಲ. ----ಎಮರ್ಸನ್.
8. ಜೀವನದಲ್ಲಿ ಪ್ರಾಮಾಣಿಕತೆಗಿಂತ ಐಶ್ವರ್ಯ ದೊಡ್ಡದಲ್ಲ.----ಜಾನ್ ರಸ್ಕಿನ್.
9. ಅರ್ಹರ ಮುಂದೆ ಕೊಂಕಿಲ್ಲದ ತಪ್ಪೊಪ್ಪಿಗೆ , ಮತ್ತೆ ಮಾಡೆನೆಂಬ ಭರವಸೆ ಇವೇ ಪರಿಶುದ್ಧವಾದ ಪಶ್ಚಾತ್ತಾಪ. ----ಮಹಾತ್ಮಾ ಗಾಂಧಿ.
10. ಸೌಂದರ್ಯವೇ ಸತ್ಯ. ಸತ್ಯವೇ ಸೌಂದರ್ಯ. ಬದುಕಿಗೆ ಬೇಕಾಗಿರುವುದು ಇದೇ.---- ಜಾನ್ ಕೀಟ್ಸ್.
11. ತಾಳ್ಮೆ ಕಹಿಯಾದರೂ ಅದರ ಫವ ಸಿಹಿ. ---- ರೂಸೊ.
12. ತೆಗೆದುಕೊಳ್ಳುವುದಕ್ಕಿಂತ ಮೊದಲು ಕೊಡು.ಅದರಿಂದ ನಿನಗೆ ಅತ್ಯಂತ ಒಳ್ಳೆಯದೇ ಸಿಕ್ಕೀತು.----ಸ್ವಾಮಿ ರಂಗನಾಥಾನಂದ.
13. ದುಃಖಿಸಬೇಡಿ.ನೀವು ಕಳೆದುಕೊಂಡದ್ದು ಇನ್ನೊಂದು ರೂಪದಲ್ಲಿ ನಿಮ್ಮೆದುರು ಬಂದೇ ಬರುತ್ತದೆ. ---- ಜಲಾಲುದ್ದೀನ್ ರೂಮಿ.
14. ಅನುಭವವೆಂದರೆ ತಪ್ಪುಗಳನ್ನು ಮಾಡುವುದು ಮತ್ತು ಅದರಿಂದ ಕಲಿಯುವುದು.---- ಬಿಲ್ ಆಕ್ಮನ್.
15. ದಾರಿ ಗೊತ್ತಿರುವವನು , ದಾರಿಯಲ್ಲಿ ನಡೆಯುವವನು ಮತ್ತು ದಾರಿ ತೋರಿಸುವವನೇ ನಿಜವಾದ ನಾಯಕ. ---- ಜಾನ್ ಮ್ಯಾಕ್ಸ್ ವೆಲ್.
16. ಆಡಳಿತ ಕೆಲಸವನ್ನು ಸರಿ ಮಾಡಿಸುತ್ತದೆ.ನಾಯಕತ್ವ ಸರಿಯಾದ ಕೆಲಸವನ್ನು ಮಾಡಿಸುತ್ತದೆ.-----ಪೀಟರ್ ಡ್ರೆಕರ್.
17. ತಪ್ಪುಗಳನ್ನು ಹುಡುಕಬೇಡಿ; ಪರಿಹಾರಗಳನ್ನು ಹುಡುಕಿ. ----ಹೆನ್ರಿ ಫೋರ್ಡ್.
18. ಹುಟ್ಟು ಹಾಕದೆ ಕುಳಿತವನಿಗೆ ಮಾತ್ರ ದೋಣಿಯಲ್ಲಿ ತೂತು ಕೊರೆಯಲು ಸಮಯವಿರುತ್ತದೆ.---- ಜೀನ್ ಪಾಲ್ ಸಾರ್ತ್ರೆ.
19. ನೀವು ಚಟುವಟಿಕೆಯಿಂದ ಇದ್ದಾಗ ಎಲ್ಲ ಕೆಲಸಗಳೂ ಸುಲಭ.ನೀವು ಸೋಮಾರಿಯಾಗಿದ್ದಾಗ ಎಲ್ಲಾ ಕೆಲಸವೂ ಕಷ್ಟ. ----ಸ್ವಾಮಿ ವಿವೇಕಾನಂದ.
20. ನಿಮ್ಮ ಜೀವನದಲ್ಲಿ ಕೆಲವರು ಆಶೀರ್ವಾದದಂತೆ ಬರುತ್ತಾರೆ; ಇನ್ನು ಕೆಲವರು ಪಾಠದಂತೆ ಬರುತ್ತಾರೆ ----ಮದರ್ ತೆರೆಸಾ.
21. ಕಣ್ಣಿದ್ದು ದೂರದೃಷ್ಟಿ ಇಲ್ಲದಿರುವುದು ,ಕುರುಡರಾಗಿರುವುದಕ್ಕಿಂತ ಕೆಟ್ಟದ್ದು.----- ಹೆಲನ್ ಕೆಲ್ಲರ್.
22. ಸುಖದ ದಾಹ ಮನೆಯೊಳಗೆ ಅತಿಥಿಯಂತೆ ಬರುತ್ತದೆ, ಬಳಿಕ ಅತಿಥೇಯನಾಗುತ್ತದೆ.ಕೊನೆಗೆ ಮನೆಯನ್ನೇ ಆಳುತ್ತದೆ.-----ಗಲೀಲ್ ಗಿಬ್ರಾನ್.
23. ಸಾಮಾನ್ಯವಾಗಿ ನಾಳೆ ಎನ್ನುವುದು ಇಡೀ ವಾರದಲ್ಲಿ ಪುರುಸೊತ್ತೇ ಇಲ್ಲದ ದಿನ. -----ಸ್ಪೇನ್ ಗಾದೆ.
24. ಸತ್ಯವನ್ನು ಹುಡುಕಾಡುವವನನ್ನು ನಂಬಿ; ಸತ್ಯವನ್ನು ಕಂಡುಹಿಡಿದವನನ್ನು ಸಂಶಯಿಸಿ.----ಆಂಡ್ರೆ ಗೈಡ್.
25. ಬರಿಹೊಟ್ಟೆಯಲ್ಲಿ ಇರುವವನಿಗೆ ಆಹಾರವೇ ದೇವರು.---- ಮಹಾತ್ಮಾ ಗಾಂಧಿ.
1. ಎಲ್ಲಕ್ಕೂ ಮನಸ್ಸೇ ಕಾರಣ. ಅದು ಪರಿಶುದ್ಧವಾಗದೆ ಯಾವ ಒಳ್ಳೆಯ ಕೆಲಸವೂ ಆಗುವುದಿಲ್ಲ. ------ಶ್ರೀ ಶಾರದಾದೇವಿ.
2. ಹೊಸ ಪುಸ್ತಕವೊಂದನ್ನು ನೀವು ನಿಮ್ಮ ಮನೆಗೆ ತಂದಿರೆಂದರೆ, ಹೊಸ ಹಿತೈಷಿಯೊಬ್ಬ ನಿಮ್ಮ ಮನೆಗೆ ಬಂದನೆಂದು ತಿಳಿಯಬೇಕು. -----ಹಾ.ಮಾ.ನಾಯಕ.
3. ಕೀರ್ತಿ ಯನ್ನು ಜೀರ್ಣಿಸಿಕೊಳ್ಳುವುದು ಬಹಳ ಕಷ್ಟ. -----ಕುವೆಂಪು.
4. ಕಡಿಮೆ ಮಾತನಾಡಿ, ಹೆಚ್ಚು ಆಲಿಸಿ.-----ಎಮರ್ಸನ್.
5. ಕರೆ ಕಳುಹಿಸದೆ ಬರುವುದು ಎಷ್ಟು ತಪ್ಪೋ , ಕೇಳದೇ ಬುದ್ದಿವಾದ ಹೇಳುವುದು ಅಷ್ಟೇ ತಪ್ಪು. ----- ತ.ರಾ.ಸು.
6. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ.-----ಸ್ವಾಮಿ ವಿವೇಕಾನಂದ
7. ಚಿಂತನೆ ಇಲ್ಲದಿದ್ದರೆ ಯಶಸ್ಸು ಸಿಗುವುದಿಲ್ಲ. -----ಜಿಡ್ಡು ಕೃಷ್ಣ ಮೂರ್ತಿ.
8. ಎಷ್ಟು ಕಾಲ ಬದುಕುವೆ ಎಂಬುದಕ್ಕಿಂತ ಹೇಗೆ ಬದುಕುವೆ ಎಂಬುದೇ ಮುಖ್ಯ. -----ಪಿ.ಸೈರಸ್.
9. ನೀವು ತಪ್ಪು ಮಾಡದಂತಿರಲು ನಿಮ್ಮನ್ನು ನೀವೇ ಸಂದೇಹದಿಂದ ನೋಡಿರಿ.------ಸ್ವಾಮಿ ವಿವೇಕಾನಂದ .
10. ಆರಂಭದಲ್ಲಿ ಯೋಚಿಸದವನು ಕೊನೆಯಲ್ಲಿ ಸಂಕಟಪಡುತ್ತಾನೆ.----- ಇಟಲಿ ಗಾದೆ.
11. ನಮಗೆ ಒಪ್ಪದ ವಿಚಾರಗಳನ್ನು ವಿಚಾರಗಳಿಂದಲೇ ಹೊಡೆದು ಹಾಕಬೇಕು.ವ್ಯಕ್ತಿಗಳನ್ನು ಹೊಡೆಯುವುದರಿಂದ ವಿಚಾರಗಳನ್ನು ಅಳಿಸಲಾಗುವುದಿಲ್ಲ.----- ಹಾ.ಮಾ.ನಾಯಕ.
12. ತಿಳಿದು ಬದುಕುವುದು ಮನುಷ್ಯ ಧರ್ಮ; ತಿಂದು ಬದುಕುವುದು ಪ್ರಾಣಿ ಧರ್ಮ.-----ದ.ರಾ.ಬೇಂದ್ರೆ.
13. ಸ್ವರ್ಗವೆನ್ನುವುದು ಇನ್ನೆಲ್ಲಿಯೂ ಇಲ್ಲ. ಅದು ಸುಖೀ ಸಂಸಾರದಲ್ಲಿಯೇ ಇದೆ.-----ಪಾಟೀಲ ಪುಟ್ಟಪ್ಪ.
14. ಜಗತ್ತಿನಲ್ಲಿ ಅತ್ಯಂತ ಬಲಯುತ ಶಕ್ತಿ ಎಂದರೆ ಪ್ರೀತಿ. ಪ್ರೀತಿ ಇಲ್ಲದ ಜೀವನ ಸಾವಿಗೆ ಸಮ.-----ಮಹಾತ್ಮಾ ಗಾಂಧಿ.
15. ದೊಡ್ಡ ಯೋಚನೆಗಳೊಡನೆ ಇರುವವರು ಎಂದೂ ಏಕಾಂಗಿಗಳಲ್ಲ.------ ಸರ್ ಫಿಲಿಪ್ ಸಿಡ್ನಿ.
16. ಕಲಿಯಲು ತಿರಸ್ಕರಿಸುವುದು ಜೀವಿಸಲು ತಿರಸ್ಕರಿಸುವುದಕ್ಕೆ ಸಮನಾದುದು.-----ರಾಮಕೃಷ್ಣ ಪರಮಹಂಸ.
17. ಶೀಲಬಾಹಿರವಾದ ಶಿಕ್ಷಣ ಪಾಪದಿಂದ ಕೂಡಿರುತ್ತದೆ.-----ಮಹಾತ್ಮಾ ಗಾಂಧಿ.
18. ಕಷ್ಟಗಳಲ್ಲಿ ಧೈರ್ಯವನ್ನು ತಳೆದವನೇ ದೊಡ್ಡವನು.------ ಆಚಾರ್ಯ ಸೋಮದೇವ.
19. ಪ್ರಮುಖ ತತ್ವಗಳು ಬದಲಾಯಿಸಲಾರದಷ್ಟು ದೃಢವಾಗಿರಬೇಕು.-----ಅಬ್ರಹಾಂ ಲಿಂಕನ್.
20. ಜ್ಞಾನಕ್ಕೆ ಸಮನಾದ ಪವಿತ್ರ ವಸ್ತು ಬೇರೊಂದಿಲ್ಲ.----'ಭಗವದ್ಗೀತೆ.
21. ಸ್ವಸಹಾಯದಲ್ಲಿ ನಂಬಿಕೆ ಇರುವವರಿಗೆ ದೇವರು ಸಹಾಯ ಮಾಡುತ್ತಾನೆ.---- ಬೆಂಜಮಿನ್ ಫ್ರಾಂಕ್ಲಿನ್.
22. ಮನುಷ್ಯನ ಬೆಳವಣಿಗೆಗೆ ಬೇಕಾದ ಸ್ವಾರ್ಥವು ಅವನಲ್ಲಿರಬೇಕು.ಆದರೆ ಮಿತಿ ಮೀರಿದ ಸ್ವಾರ್ಥವಿರಕೂಡದು-----ಶಿವರಾಮ ಕಾರಂತ.
23. ಆತ್ಮವಿಶ್ವಾಸ, ಜಯದ ಮೊದಲ ಗುಟ್ಟು. ----ಎಮರ್ಸನ್.
24. ಬಾಳನ್ನು ಹಸನಾಗಿಸಿಕೊಳ್ಳಬೇಕು.ಪ್ರಹಸನವಾಗಿಸಿಕೊಳ್ಳಬಾರದು.------ಕೆ.ಎಸ್.ನಿಸಾರ್ ಅಹಮದ್.
25. ಲೋಪಗಳಿಂದಲೇ ದೊಡ್ಡವರು ರೂಪುಗೊಂಡಿದ್ದಾರೆ.-----ಷೇಕ್ಸ್ ಪಿಯರ್.
---------@@@@@@@@@@@@@@@------------